Saturday 2 July 2011

ಅದೇ ಆ ಟಿ.ವಿ..........!

ಕೆ.ಎಸ್.ಧನಂಜಯ, ಮಡಿಕೇರಿ.



    ಮನುಷ್ಯ ತನ್ನ ಉದ್ದಾರವನ್ನು ತಾನೇ ಮಾಡಿಕೊಳ್ಳ ಬೇಕು ತನ್ನ ಅವನತಿಯನ್ನು ತಾನೇ ಮಾಡಿಕೊಳ್ಳಬಾರದು, ತನಗೆ ತಾನೆ ಮಿತ್ರನು ತಾನೇ ಶತ್ರುವು ಎಂಬ ಒಂದೇ ಒಂದು ತತ್ವದ ಅಡಿಯಲ್ಲಿ ಈ ಜಗತ್ತಿನಲ್ಲಿರುವ ಅದೆಷ್ಟು ಜನರ ಬದುಕು ನಿಂತಿದೆ.ಇದನ್ನು ಅರಿತು ಅದೆಷ್ಟು ಜನರು ಅಂತಹ ಘನ ಘೋರವಾದ ತಪ್ಪನ್ನು ಮಾಡಲು ಸ್ವತಃ ಬಯಸುವುದಿಲ್ಲ. ಇಂತಹ ತತ್ವಗಳಿಂದ ಅದೆಷ್ಟು ಜೀವಗಳು ಈಗಲೂ ದೂರವಿದೆ ಎಂದರೆ ತಿಳಿದಿಲ್ಲವೆಂದು ಹೇಳಬಹುದು. ಇಂದು ಈ ಸುಂದರ ಜಗತ್ತಿಗೆ ಕಾಲಿಡುವ ಅದೆಷ್ಟು ಮುಗ್ದ ಮನಸ್ಸಿಗೆ ಇಂತಹ ಚಿಂತನೆಗಳನ್ನು ತುಂಬುವ ಅಗತ್ಯತೆ ಇದೆ.
     ಚಿಂತೆ ಮಾಡಬಾರದು ಆದರೆ ಚಿಂತನೆಗಳನ್ನು ಮಾಡಲೇ ಬೇಕು, ಬದುಕನ್ನು ರೂಪಿಸುವವು ಈ ಚಿಂತನೆಗಳು ನಮ್ಮನ್ನು ಮನುಷ್ಯನ ಹತ್ತಿರಕ್ಕೆ ಕರೆದುಕೊಂಡು ಹೋಗುವಂತಹವುಗಳು ಇಂತಹ ಚಿಂತನೆಗಳು.ಚಿಂತೆ ಮತ್ತು ಚಿತೆ ಒಂದೇ ನಾಣ್ಯದ ಎರಡು ಬದಿ ಇದ್ದಂತೆ ಚಿಂತೆ ಮನುಷ್ಯನ ಆಂತರಿಕ ಬದುಕನ್ನು ಸುಟ್ಟರೆ ಚಿತೆ ದೇಹವನ್ನ ಸುಡುತ್ತದೆ. ಚಿಂತನೆ ಬದುಕನ್ನು ಗಟ್ಟಿಯಾಗಿಸುತ್ತದೆ. ಇದು ಒಬ್ಬ ವಿಧ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ನಿಂತಿರುವ ಚಿಂತನೆ. ಎಕೆ ಇಂತಹ ಅಮೂಲ್ಯವಾದ ಬದುಕು ಇಂತಹ ದುರಂತಕ್ಕೆ ಶರಣಾಗುತ್ತಿದೆ? ಬದುಕನ್ನು ನಿರೂಪಿಸಿ ಸಾಧಿಸ ಬೇಕಾದ ಏಕಮಾತ್ರ ಹೊಣೆಗಾರಿಕೆಯನ್ನು ಹೊರಲಾಗದ ನಾವು ಇತರರ ಒಳಿತನ್ನು,ಕೆಡುಕನ್ನು ಹೊರಲು ಸಾದ್ಯವೇ ? ನಮ್ಮವರು ಏಕೆ ಆತ್ಮಹತ್ಯೆಯ ಗುಲಾಮರಾಗುತ್ತಿದ್ದಾರೆ? ಇಂತಹ ಪ್ರಶ್ನೆಗಳು ಮೇಲಿಂದ ಮೇಲೆ ಬರುತ್ತದೆ. ಬಂದರೆ ಅದಕ್ಕೆ ಉತ್ತರವನ್ನು ಹುಡುಕುವುದರಲ್ಲಿ ಏಕಾಗ್ರತೆಯನ್ನು ಕೇಂದ್ರಿಕರಿಸಬೇಕು. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇಂತಹ ನೂರೆಂಟು ಕೆಟ್ಟ ಯೋಚನೆಗಳು ನಮ್ಮಗಳ ತಲೆ ತಿನ್ನುತ್ತಿರುತ್ತದೆ ಅದರೆ ನಾವು ಖುಷಿಯಾಗಿದ್ದಾಗ ಅದಕ್ಕೆ ಮಣೆ ಹಾಕುವುದಿಲ್ಲಾ. ಬದುಕಿಗೊಂದು ಆಘಾತ,ಚಿಂತೆ ಪ್ರವೇಶ ಪಡೆದಿದ್ದರೆ ನಾವು ಕ್ಷಣ ಕಾಲದಲ್ಲಿ ಅದಕ್ಕೆ ಬಹಳ ಕೆಟ್ಟದಾದ ಉತ್ತರವನ್ನು ನಮ್ಮ ಬದುಕಿನ ಪುಟಗಳಲ್ಲಿ ದಾಖಲಿಸಿ ಬಿಡುತ್ತೇವೆ. ಆ ಆಘಾತ ಮತ್ತು ಕೆಟ್ಟ ಚಿಂತನೆ ಧೀರ್ಘಕಾಲದಿಂದ ಕಾಡುತ್ತಿದ್ದರೆ ಮಾತ್ರ ಸಮಾಜದಲ್ಲಿ ಉತ್ತಮರು ಎಣಿಕೊಂಡವರೂ ಕೂಡ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದನ್ನು ದೂರದಿಂದ ಚಿಂತಿಸುವವರಿಗೆ ಇವರು ಅಪರಾದಿಗಳು, ಬದುಕನ್ನು ಮನ್ನಡೆಸಲು ಬಾರದವ  ಎಂದು ಹೇಳಿ ಬಿಡುತ್ತೇವೆ. ಸಮಸ್ಯೆ ಬರುವುದೆ ಮನುಷ್ಯನಿಗೆ ಹೊರತು ಮರಕಲ್ಲ, ಮನುಷ್ಯನ ಬದುಕು ಸಮಸ್ಯೆಯಲ್ಲಿ ಸಿಲುಕಿ ಸೊಗಸು ಕಾಣಬೇಕು ಎಂದು ಬಲ್ಲವರು ಹೇಳುತ್ತಾರೆ. ಹಾಗಾದರೆ ಅದರ ಸವಿಹೆ ಬೇರೆ, 
     ಆದರೆ ಮೊನ್ನೆ ಬೆಂಗಳೂರಿನಲ್ಲಿ ತನ್ನ ಬಿಸಿಯೂಟ ಮಾಡಿಕೊಡುವ ಸಹಾಯಕಿ ಸತ್ತಲೆಂದು ಆತ್ಮಹತ್ಯೆ ಮಾಡಿಕೊಂಡ ಎರಡನೆ ತರಗತಿ ಮಗು, ಆ ಮುಗ್ದ ಮನಸ್ಸನ್ನು ಅಪರಾದಿ ಹೆಡಿ ಎಂದು ಹೇಳಲು ಸಾಧ್ಯವೆ? ಇಲ್ಲ, ಆ ಮುಗ್ದ ಮನಸ್ಸು ಬೆಳೆದಿರಲಿಲ್ಲ,ಅದರಲ್ಲಿ ಮುಗ್ದತೆ ಇದೆ , ಚಿಂತನೆಗಳು ಹೇಗೆ ಬರಲು ಸಾಧ್ಯ ? ನಾವು ಮಕ್ಕಳನ್ನು ಅವರು ಕೇಳಿದೆಲ್ಲ ನೀಡಿ ಸಾಕಿ ಸಲಹುತ್ತೇವೆ ವಿಧ್ಯಭ್ಯಾಸ ನೀಡಿ ಮುನ್ನಡೆಸುತ್ತೇವೆ. ನಮ್ಮ ದ್ವೇಶ,ಅಸೂಹೆ, ಮನಸ್ತಾಪವನ್ನು ಆ ಮುಗ್ದ ಮನಸುಗಳ ಮುಂದೆ ತರೆದಿಡುತ್ತೇವೆ. ಆದರೆ ಚಿಂತನೆಗಳ ವಿಷಯಕ್ಕೆ ಬಂದಾಗ ನಾವು ಶೂನ್ಯರಾಗುತ್ತೇವೆ. ಅಂತಹ ಒಂದು ವಿಷಯಗಳನ್ನು ಹೇರುವುದರಲ್ಲಿ ನಾವು ಬಹಳ ಹಿಂದೆ ಬಿದ್ದಿದ್ದೇವೆ. ಆತನ ತಂದೆ-ತಾಯಿಯಂತೆ ಇನ್ನು ಅನೇಕರಿದ್ದಾರೆ ಪರಿಕ್ಷೆಯ ಸಮಯದಲ್ಲಿ ಟಿ.ವಿ.ನೋಡಬಾರದು ಇನೊಂದು ಮತ್ತೊಂದು ಮಗದೊಂದು ಎಂದು. ಅಷ್ಟಕ್ಕೆಲ್ಲಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಾಕಷ್ಟು ಇವೆ. ಆತ್ಮಹತ್ಯೆಯೆಂಬ ಕೆಟ್ಟ ಚಿಂತನೆಯನ್ನು ಆ ಮುಗ್ದ ಮನಸಿಗೆ ಹೇಳಿ ಕೊಟ್ಟವರಾರು? ಆತ್ಮಹತ್ಯೆಯನ್ನು ಈ ರೀತಿಯಾಗಿ ಮಾಡಬೇಕು ಅದರ ಮಾರ್ಗವನ್ನು ತಿಳಿಸಿದವರ್‍ಯಾರು? ಅದೇ ಆ ಟಿ,ವಿ ಸುಮಾರು ೧೦೦ ಕ್ಕೆ ೭೦ ಭಾಗದಷ್ಟು ಅಪಾಯಕಾರಿ ವಿಷಯವನ್ನು, ಕೆಟ್ಟ ವಿಷಯವನ್ನು ಧೀರ್ಘವಾಗಿ ಬಿಂಬಿಸುವ ಅದೇ ಟಿ.ವಿ. ದೂರದ ಅನೈತಿಕ ವಿಷವನ್ನು ಧೀರ್ಘವಾಗಿ ಬಿಂಬಿಸಿ ನೈತಿಕ ವಿಷಯವನ್ನು ಕಡಿತಗೊಳಿಸುವ, ಅಪರಾದ,ವಿಚಾರಪರ ಚಿಂತೆ ಇಲ್ಲದ ಧಾರವಾಹಿ, ಸಾಹಿತ್ಯವಿಲ್ಲದ ಹಾಡುಗಳು,ಮುಗ್ದ ಮನಸ್ಸನ್ನು ತಿರುಗಿಸುವ ಅಶ್ಲೀಲ ನೃತ್ಯಗಳು. ಹೌದು ಬದುಕಿನ ಅದೆಷ್ಟು ಸುಂದರ ಚಿಂತನೆಗಳನ್ನು ಮರೆಮಾಡಿ ಆತ್ಮಹತ್ಯೆಯನ್ನಾಗಲಿ, ಕೊಲೆಯನ್ನಾಗಲಿ ಹೀಗೆಯೇ ಮಾಡಬೇಕು ಎಂದು ತಿಳಿ ಹೇಳುವ ಸಿನಿಮಾಗಳು ಅದನ್ನು ಜನರ ಮನೆಗಳಿಗೆ, ಮನಗಳಿಗೆ ಪ್ರತಿನಿತ್ಯ ತಲುಪಿಸುವ ಮೂರ್ಖರ ಪೆಟ್ಟಿಗೆ. ಇದನ್ನು ನೋಡ ಬೇಡ ಎಂದು ಹೇಳಿದರೆ, ಇದಕ್ಕಾಗಿ ನಿನ್ನ ಜೀವನದ ಅಮೂಲ್ಯ ಸಮಯವನ್ನು ಕಳೆದುಕೊಳ್ಳ ಬೇಡ ಎಂದು ಹೇಳಿದರೆ ತಪ್ಪೆ? ಆತ್ಮಹತ್ಯೆ, ಛೇ.. ಇದು  ಏನೆ ಇರಲಿ ನಮ್ಮ ಮಕ್ಕಳಲ್ಲಿ ಮಾನವೀಯ, ವಿಚಾರಪರ, ಚಿಂತನೆಗಳನ್ನು ತುಂಬುವ ಅಗತ್ಯವಿದೆ. ಹೇಗೆಂದರೆ ಹಾಗೆ ಲಂಗು ಲಗಾಮಿಲ್ಲದೆ ಚಲಿಸುವ ಆ ಮನಸ್ಸುಗಳಿಗೆ ಚಿಂತನೆ ತುಂಬುವ ಅಗತ್ಯವಿದೆ ಪಠ್ಯದ ಜೊತೆ ಜೊತೆಯಲ್ಲಿ ವಿಚಾರ ಪರ ಚಿಂತನೆ ಬೆಳೆಸ ಬೇಕಾಗಿದೆ ಏನಂತೀರಾ ? ``  





No comments:

Post a Comment