ಕೆ,ಎಸ್ .ಧನಂಜಯ
ಡಿವಿಜಿಯವರ
ಕಗ್ಗದ ಸಾಲು ಯಾರು ಓದಿಲ್ಲ ಯಾರು ಕೇಳಿಲ್ಲ ?
ನಗುವು
ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ
ಕೇಳುತ ನಗುವುದತಿಶಯದ ಧರ್ಮ
ನಗುವ
ನಗಿಸುವ ನಗಿಸಿ ನಗುತ ಬಾಳುವ
ವರವ
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ.
ಹೌದು
ನಾನು ಹೇಳಲು ಹೊರಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದು ರೀಲ್ಸ್ ನಂತರ ಬರುವು ಕಾಫಿ ಕಪ್
ಹಿಡಿದು ನಗುತ್ತಿರುವ ಹುಡುಗ ತೆಲಂಗಾಣದ ಅರಣ್ ಬಗ್ಗೆ
“ನಗು” ಎಂಬುದು ಕೇವಲ ಮುಖದ ಭಾವವಲ್ಲ, ಅದು ಬದುಕಿನ ತತ್ತ್ವ. ನಗುವುದು ನಮ್ಮ ಸಹಜ ಗುಣ;
ಆದರೆ ಇನ್ನೊಬ್ಬರನ್ನು ನಗಿಸುವುದು ಒಂದು ಮಹತ್ತರ ಧರ್ಮ. ನಗುವನ್ನು ಕೇಳಿ ಮತ್ತೊಮ್ಮೆ ನಗುವುದು ಇನ್ನಷ್ಟು
ಉನ್ನತ. ಅಂತಿಮವಾಗಿ, ನಗುತ–ನಗಿಸುತ್ತ ಬದುಕುವುದು ಮಾನವನಿಗೆ ದೊರೆಯುವ ಶ್ರೇಷ್ಠ ವರ. ಅಂದ ಹಾಗೆ ಇಂತಹ ನಗುವಿನ ಮಹತ್ವ ಅರುಣ್ ಎಂಬ ಸರಳ ಹುಡುಗನ
ಬದುಕಿನಲ್ಲಿ ಕಾಣಬಹುದು ಅವನ ನಗು ಕೇವಲ ಹಾಸ್ಯವಲ್ಲ ಅದು ಕಷ್ಟಗಳ ನಡುವೆ ಹುಟ್ಟಿದ ಬೆಳಕು. ಈತನ ಸ್ಫೂರ್ತಿದಾಯಕ
ಕಥೆ ಬಡತನವನ್ನು ಮೆಟ್ಟಿ ನಿಂತು, ಶಿಕ್ಷಣದ ಮಹತ್ವ ಮತ್ತು ಸಾಮಾಜಿಕ ಜಾಲತಾಣದ ಶಕ್ತಿಯನ್ನು ಸಾರುತ್ತದೆ.
ಈತ ನಮ್ಮ ಪಕ್ಕದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಳಪಲ್ಲಿ ಜಿಲ್ಲೆಯ ನಾಲಪ್ಪುಚಟುವಲ್ಲಿ
ಗ್ರಾಮದವನು. ಅತ್ಯಂತ ಬಡತನದ ಕುಟುಂಬದಿಂದ ಬಂದ ಅರುಣ್, ಜೀವನೋಪಾಯಕ್ಕಾಗಿ ಲಾರಿಯಲ್ಲಿ ಕ್ಲೀನರ್ (ಸಹಾಯಕ) ಆಗಿ ಕೆಲಸ ಮಾಡುತ್ತಿದ್ದಾನೆ.
ಈ ವಿಡಿಯೋ ಯಾವುದೇ ಪ್ಲಾನಿಂಗ್ ಮಾಡಿ ಮಾಡಿದ್ದಲ್ಲ, ಬದಲಾಗಿ ಅದೊಂದು ಆಕಸ್ಮಿಕ ಸುಂದರ ಕ್ಷಣ, ಲಾರಿ
ಚಾಲಕ ನೆಹರು ಅವರು ಚಹಾ ಕುಡಿಯುವಾಗ ಒಂದು ಜೋಕ್ ಹೇಳುತ್ತಾರೆ. ಅದನ್ನು ಕೇಳಿ ಅರುಣ್ ತನ್ನ ಮುಗ್ಧತೆಯಿಂದ
ಗಹಗಹಿಸಿ ನಗುತ್ತಾನೆ. ಅರುಣ್ ನಗುವನ್ನು ನೆಹರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ
ಹಂಚಿಕೊಳ್ಳುತ್ತಾರೆ. ಅಪ್ಲೋಡ್ ಆದ ಕೇವಲ ಒಂದೂವರೆ ತಿಂಗಳಲ್ಲೇ ಈ ವಿಡಿಯೋ 40 ಮಿಲಿಯನ್ (4 ಕೋಟಿ)
ವೀಕ್ಷಣೆಗಳನ್ನು ದಾಟಿ ದಾಖಲೆ ಬರೆಯಿತು. ಅರುಣ್ ಬಡತನದ ಕಾರಣದಿಂದ ಕೇವಲ 4ನೇ ತರಗತಿಗೆ ಶಾಲೆಯನ್ನು
ಅರ್ಧಕ್ಕೆ ಬಿಟ್ಟಿದ್ದನು. ಆದರೆ, ಈ ವಿಡಿಯೋ ವೈರಲ್ ಆದ ನಂತರ ಚಾಲಕ ನೆಹರು ಅವರ ಬೆಂಬಲದಿಂದ ಅರುಣ್
ಮತ್ತೆ ಓದಿನತ್ತ ಮುಖ ಮಾಡಿದ್ದಾನೆ. ಇತ್ತೀಚಿನ ವರದಿಗಳ ಪ್ರಕಾರ, ಅರುಣ್ 10ನೇ ತರಗತಿ ಪರೀಕ್ಷೆ ಬರೆದು
ಉತ್ತೀರ್ಣನಾಗಿದ್ದಾನೆ. ರಾತ್ರೋರಾತ್ರಿ ಪ್ರಸಿದ್ಧಿ ಪಡೆದ ಅರುಣ್ ಈಗ ತೆಲಂಗಾಣದಲ್ಲಿ ಸೆಲೆಬ್ರಿಟಿ.
ಅನೇಕ ದೊಡ್ಡ ದೊಡ್ಡ ಯೂಟ್ಯೂಬ್ ಚಾನೆಲ್ಗಳು ಈತನನ್ನು ಸಂದರ್ಶನ ಮಾಡಿವೆ. ನಗುವಿಗೆ ಜಾತಿ,
ಧರ್ಮ ಅಥವಾ ಭಾಷೆಯ ಹಂಗಿಲ್ಲ ಎಂಬುದು ಅರುಣ್ ವಿಷಯದಲ್ಲಿ ಸಾಬೀತಾಗಿದೆ. ಆತನ ಮುಗ್ಧ ನಗು ಎಂತಹ
ಒತ್ತಡದಲ್ಲಿರುವವರಿಗೂ ಒಂದು ಕ್ಷಣ ನಗು ತರಿಸುತ್ತದೆ. ಲಾರಿ ಕ್ಲೀನರ್ ಆಗಿ ದುಡಿಯುವ ಅರುಣ್ನ ಜೀವನ
ಸುಲಭವಲ್ಲ. ದಿನಪೂರ್ತಿ ಧೂಳು, ಹೊರೆ, ಶ್ರಮ — ಅವನ ದಿನಚರಿ. ಆದರೂ, ಅವನ ಮುಖದಲ್ಲಿ ಕುಗ್ಗಿದ ಗುರುತುಗಳಿಗಿಂತ
ಹೆಚ್ಚು ಹೊಳೆಯುವುದು ಒಂದು ನಿರ್ದೋಷ ನಗು. ಅವನ ನಗು ಏಕೆ ಜನರಿಗೆ ಇಷ್ಟವಾಯಿತು ಎಂದರೆ ಅದು ನಟನೆ
ಅಲ್ಲ, ನಿಜ. ಅದು ಅಭ್ಯಾಸವಲ್ಲ, ಆತ್ಮದಿಂದ ಬರುವ ಸ್ಪಂದನೆ.
ಕಗ್ಗ ಹೇಳುವುದು ಅದನ್ನೇ ಅವನು
ಸಹಜವಾಗಿ ನಗುತ್ತಾನೆ — ತನ್ನ ನೋವನ್ನೂ
ಮರೆತು , ಅವನು ಇನ್ನವರನ್ನು ನಗಿಸುತ್ತಾನೆ
ತನ್ನ ಸರಳ ಮಾತುಗಳಿಂದ , ಅವನ ನಗು ಕೇಳಿದವರು ತಾವು ಕೂಡ ನಗುತ್ತಾರೆ ಅದೇ “ಅತಿಶಯದ ಧರ್ಮ”
ಇದೆಲ್ಲದರ ನಡುವೆ ಆತನ ನಗುವನ್ನು
ಸೆರೆ ಹಿಡಿದ ಡ್ರೈವರ್ ನೆಹರುರವರನ್ನು ಅಷ್ಟೇ ವಿನ್ರಮತೆಯಿಂದ ಸ್ಮರಿಸುತ್ತಾನೆ ಎಕೆಂದರೆ ಮನುಷ್ಯನಿಗೆ
ಬದುಕಿನಲ್ಲಿ ಕೃತಘ್ನತೆ ಮುಖ್ಯ ಸಹಾಯ ಸಣ್ಣದೇ ಇರಲಿ ದೊಡ್ಡದೇ ಇರಲಿ ಶುದ್ದ ಮನಸಿನಿಂದ ಮಾಡಿದ ಯಾವುದೇ
ಸಹಾಯವೂ ಶ್ರೇಷ್ಠ ಎನಿಸಿಕೊಳುತ್ತದೆ. ತನ್ನ ಜೀವನದಲ್ಲಿ ನೆಹರು ಅಣ್ಣ (ಲಾರಿ ಡ್ರೈವರ್) ದೇವರಿಗಿಂತ
ಕಡಿಮೆ ಇಲ್ಲ. ಅವರು ಆ ವಿಡಿಯೋ ಮಾಡದಿದ್ದರೆ. ನಾನು ಓದಬೇಕು ಎಂದು ಹಠ ಹಿಡಿಯದಿದ್ದರೆ ನಾನು ಇಂದಿಗೂ
ಕೇವಲ ಕ್ಲೀನರ್ ಆಗಿಯೇ ಇರುತ್ತಿದ್ದೆ. ನಾನು 10ನೇ ತರಗತಿ ಓದಲು ಅವರೇ ಕಾರಣ. ವೈರಲ್ ಆದ ಮೇಲೆ ದೊಡ್ಡ
ದೊಡ್ಡ ತೆಲುಗು ನಟರು ಮತ್ತು ಯೂಟ್ಯೂಬರ್ಗಳು ತನ್ನನ್ನು ಗುರುತಿಸಿ ಮಾತನಾಡಿಸಿದಾಗ ಆರಂಭದಲ್ಲಿ ತುಂಬಾ
ಭಯವಾಗಿತ್ತು ಎಂದು ಅರುಣ್ ನೆನಪಿಸಿಕೊಂಡಿದ್ದಾನೆ. “ಈಗ ಜನರು ನನ್ನ ಜೊತೆ ಸೆಲ್ಫಿ ಕೇಳಿದಾಗ ವಿಚಿತ್ರ
ಎನಿಸಿದರೂ ಖುಷಿಯಾಗುತ್ತದೆ. ಕೇವಲ ವಿಡಿಯೋ ಮಾಡುವುದು ಮಾತ್ರವಲ್ಲ, ಚೆನ್ನಾಗಿ ಓದಿ ಗೌರವಯುತವಾದ
ಕೆಲಸ ಮಾಡಬೇಕು ಮತ್ತು ತನ್ನಂತೆಯೇ ಬಡತನದಲ್ಲಿರುವ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಹೇಳಿರುವುದು
ಆತನಲ್ಲಿರುವ ಶುದ್ದ ಮನಸಿಗೆ ಹಿಡಿದ ಕನ್ನಡಿ ಎನಿಸುತ್ತದೆ.
ಸಂತೋಷವು ಪರಿಸ್ಥಿತಿಗಳಿಂದ ಬರೋದಿಲ್ಲ; ಅದು ಮನಸ್ಸಿನಿಂದ ಹುಟ್ಟುವುದು.”ಅಂತಿಮವಾಗಿ, ಈ ಕಗ್ಗದ ಸಾರವೇ ಅರುಣ್ನ ಜೀವನದಲ್ಲಿ ಜೀವಂತವಾಗುತ್ತದೆ ನಗುತ, ನಗಿಸುತ್ತ, ಕಷ್ಟಗಳ ನಡುವೆಯೇ ಬೆಳಕು ಹಚ್ಚಿ ಬದುಕುವುದು. ಆತ ನ ನಗು ನಮಗೆ ಕಲಿಸುವ ಪಾಠ ಬದುಕು ಎಷ್ಟು ಕಠಿಣವಾದರೂ, ಒಂದು ಸಣ್ಣ ನಗು ಅದನ್ನು ಸಹನೀಯವಾಗಿಸುತ್ತದೆ, ಮತ್ತೊಬ್ಬರ ಮುಖದಲ್ಲಿ ನಗು ಮೂಡಿಸಿದಾಗ, ನಮ್ಮ ಬದುಕೇ ಅರ್ಥಪೂರ್ಣವಾಗುತ್ತದೆ.


