Saturday, 13 August 2011

ಕೊಡಗಿನ ಸುತ ಕಾದಂಬರಿಗಾರ ಭಾರತೀಸುತ......!

ಕೆ.ಎಸ್.ಧನಂಜಯ,ಮಡಿಕೇರಿ




ಚಿತ್ರ೧.ಭಾರತೀಸುತ. ಚಿತ್ರ ೨.(ಕಯ್ಯಾರ ಕಿಞ್ಞಣ್ಣ ರೈ ಕುಳಿತವರು, ನಿಂತವರು, ರಾಮಚಂದ್ರ, ಶ್ರೀ ಎನ್ ಮಹಾಭಲೇಶ್ವರ ಭಟ್, ಭಾರತೀಸುತರ ಶಿಷ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಪಿ.ರಮೇಶ್, ಕಾರ್ಯದರ್ಶಿ ಬಿ.ಎ.ಷಂಶುದ್ದೀನ್, ಮತ್ತು ಭಾರತೀಸುತರ ಪತ್ನಿ ಶ್ರೀಮತಿ ನಾಗವೇಣಿ ಭಾರತೀಸುತ.)

ಕೊಡಗು ಪ್ರಕೃತಿಯ ವರಪ್ರಸಾದ ಈ ನೆಲವು ಹಲವು ಸಾಹಿತಿಗಳನ್ನು ಈ ಕನ್ನಡ ನಾಡಿಗೆ ಉಡುಗೊರೆಯಾಗಿ ಕೊಟ್ಟಿದೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಬರಹಗಾರರಾದ ಗುಲ್ವಾಡಿ ವೆಂಕಟರಾಯರು, ಮೊದಲ ಕನ್ನಡದ ನಿಘಂಟು ರಚಿಸಿದ ಜಾನ್ ಎಫ್ ಕಿಟೇಲ್ ರವರು, ಸಣ್ಣ ಕಥೆಗಳ ಜನಕರೆಂದೆ ಪ್ರಸಿದ್ದರಾದ ಮಾಸ್ತಿಯವರು ಕೊಡಗಿನ ಗೌರಮ್ಮ ಈ ನೆಲದಲ್ಲಿ ಬದುಕಿದವರು ಎನ್ನುವುದು ಈ ಮಣ್ಣಿನ ಹೆಮ್ಮೆ. ಹಾಗೇಯ ಹಲವು ಚಿರಸ್ಥಾಯಿ ಸಾಹಿತಿಗಳಿಗೆ ಈ ನೆಲವು ಜನ್ಮ ನೀಡಿದೆ ಇಂತಹ ಮಹಾನ್ ಸಾಹಿತಿಗಳಲ್ಲಿ ಒಬ್ಬರು ನಮ್ಮ ಶಾನಬಾಗ ರಾಮಯ್ಯ ನಾರಯಣ ರಾವ್.

        ಶಾನಬಾಗ ರಾಮಯ್ಯ ನಾರಯಣರಾವ್ ರವರು ಜನಿಸಿದ್ದು ಮೇ 15,1915 ರಂದು ಕೊಡಗಿನ ಮಡಿಕೇರಿಯ ಬಿಳಿಗೇರಿಯಲ್ಲಿ ರಾಮಯ್ಯ ಹಾಗೂ ಸುಬ್ಬಮ್ಮರಿಗೆ ಸುಪುತ್ರರಾಗಿ ಜನಿಸಿದ ಭಾರತಿ ಸುತರವರು ಹುಟ್ಟಿ ಸರಿ ಸುಮಾರು 110 ವರ್ಷಗಳು ಕಳೆದು ಹೋಗಿದೆ, ಎಡಕಲ್ಲು ಗುಡ್ಡದ ಮೇಲೆ, ಬಯಲು ದಾರಿ, ಗಿರಿ ಕನ್ಯೆ, ಹುಲಿ ಹಾಲಿನ ಮೇವು ಸಿನಿಮಾ ಗೊತ್ತಿದೆ ಆದರೆ ಅದರ ಕಾದಂಬರಿಕಾರ ಸಾಹಿತಿ ಕೊಡಗಿನ ನೆಲದಲ್ಲಿ ಇದ್ದರೂ ಎನ್ನುವುದೇ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ನಮ್ಮ ಜಿಲ್ಲೆಯವರು ಎನ್ನುವುದೇ ನಮ್ಮ ಹಿರಿಮೆ ಮತ್ತು ಅಸ್ಮಿತೆ. ಭಾರತಿಸುತರ ಕುಟುಂಬದವರು ದಾರೋಟು ಎಂಬ ಗ್ರಾಮ ಬಿಟ್ಟು ಮಡಿಕೇರಿಯ ಬಿಳಿಗಿರಿ ಬಳಿಗೆ ಬಂದು ನೆಲೆಸಿದವರಂತೆ ಕನ್ನಡ ಸಾಹಿತ್ಯ ಪರಿಷತ್ತು ಅವರ ನೆನಪಿಗಾಗಿ ಮೇಕೆರಿಯಿಂದ ಬಿಳಿಗೇರಿ ಹೋಗುವ ರಸ್ತೆಗೆ ಭಾರತಿಸುತ ರಸ್ತೆ ಎಂದು ನಾಮಕರಣ ಮಾಡಿ ಸಾಹಿತಿಗೆ ಗೌರವ ಸಲ್ಲಿಸಿದೆ. ಇವರು ಚಿಕ್ಕವರಿದ್ದಾಗಲೇ ಮಹಾತ್ಮ ಗಾಂಧಿಯವರ ಪ್ರಭಾವಕ್ಕೊಳಗಾಗಿ ಹಲವು ಸ್ವಾತಂತ್ರ ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದರು. ಈ ಸ್ವಾತಂತ್ರ ಹೋರಾಟದ ಚಟುವಟಿಕೆಯ ಕಾರಣದಿಂದಾಗಿ ಕೊಡಗಿನಿಂದ ಗಡಿಪಾರು ಕೂಡ ಆಗಿದ್ದರು. ನಂತರದ ಕಾಲದಲ್ಲಿ ಕುಶಾಲನಗರದ ಬಳಿಯ ಕಣಿವೆ ಗ್ರಾಮದಲ್ಲಿ ನೆಲೆನಿಂತ ಇವರು ನಾಗವೇಣಿ ಎಂಬುವವರನ್ನು ವಿವಾಹವಾದರು, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಜೀವನವನ್ನು ಪುನಾರಂಭಿಸಿ ನಂತರ ವಿರಾಜಪೇಟೆ ಹಾಗೂ ಆಗಿನ ಕಾಲಕ್ಕೆ ಮಾದರಿ ಶಾಲೆಯಾಗಿದ್ದ ಮಡಿಕೇರಿಯ ಸೆಂಟ್ರಲ್ ಹೈ ಸ್ಕೂಲ್ ನಲ್ಲಿ ಕನ್ನಡ ಮೇಷ್ಟ್ರಾಗಿ ದುಡಿದವರು ಕೊಡಗಿನ ಯಾವುದೇ ಕೃಷಿ ಅಥವಾ ಬುಡುಕಟ್ಟಿನ ಸಮುದಾಯವನ್ನಾಗಲಿ, ಭಾರತೀಯಸುತರು ತೆರೆದ ಮನಸ್ಸಿನಿಂದ ನೋಡಲು ಪ್ರಯತ್ನಿಸಿದ್ದಾರೆ ಕೊಡವರ ಪರಕಳಿ ಬೋಳಕಾಟ ಇತ್ಯಾದಿ ಸಾಂಸ್ಕೃತಿಕ ಜೀವನವನ್ನು ಬೇರೆ ಯಾರು ಅಷ್ಟು ಚೆನ್ನಾಗಿ ಕನ್ನಡಿಗರಿಗೆ ಪರಿಚಯಿಸಿರುವುದಿಲ್ಲ

 ಭಾರತಿ ಸುತ್ತರು 9ನೇ ತರಗತಿಯಲ್ಲಿರುವಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ವಯನಾಡಿನಲ್ಲಿ ಚಳುವಳಿ ನಡೆಸಿದ ಸಂದರ್ಭದಲ್ಲಿ ದಸ್ತಗಿರಿಯಾಗಿ ಆರು ತಿಂಗಳ ಕಾಲ ಜೈಲು ಅನುಭವಿಸುತ್ತಾರೆ, 1932 ರಲ್ಲಿ ಮತ್ತೆ ಬಂಧನಕ್ಕೆ ಒಳಗಾಗಿ ಕಣ್ಣೂರಿನ ಜೈಲಿನಲ್ಲಿ ಇದ್ದಾಗ ಪ್ರಮುಖ ಕಮಿನಿಸ್ಟ್ ನಾಯಕರುಗಳಾದ ಎ.ಕೆ. ಗೋಪಾಲನ್, ನಂಬೂದರಿ ಪಾಡ್ ಮತ್ತಿತರ ಎಡಪಂಥಿಯ ನಾಯಕರಿಂದ ಪ್ರಭಾವಿತರಾದವರು. ಅವರ ಮಗಳು ಹಾಗೂ ಬರಹಗಾರ್ತಿ ಕುಸುಮಾ ಶಾನಭಾಗ್ ತಮ್ಮ ಪುಟಗಳ ನಡುವಿನ ನವಿಲುಗರಿʼ ಎಂಬ ಪುಸ್ತಕದಲ್ಲಿ ತಂದೆಯ ಬಗ್ಗೆ ಪ್ರೀತಿಯಿಂದ ಹೇಳಿದ್ದಾರೆ. ಬಹಳ ಚಿಕ್ಕ ವಯಸಿನಲ್ಲೆ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ದೇಶಾಭಿಮಾನದ ಪ್ರತೀಕವಾಗಿ  "ಭಾರತಿಸುತ" ಎಂಬ ಕಾವ್ಯನಾಮದಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದವರು. ತಮ್ಮ ಜೀವಮಾನದಲ್ಲಿ ಒಟ್ಟು 32 ಕಾದಂಬರಿಗಳನ್ನು ಬರೆದಿದ್ದಾರೆ, ಇವರ ಕಾದಂಬರಿಗಳು ಕನ್ನಡ ಚಲನಚಿತ್ರಲೋಕದಲ್ಲಿ ಒಂದು ಸಂಚಲನವನ್ನೆ ಸೃಷ್ಟಿ ಮಾಡಿವೆ.  ಇವರದೆ ಕಾದಂಬರಿಗಳಾದ ಗಿರಿಕನ್ಯೆ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ, ಬಯಲುದಾರಿ ಚಲನಚಿತ್ರಗಳಾಗಿ ಅಭೂತಪೂರ್ವ ಯಶಸ್ಸನ್ನು ಪಡೆದಿವೆ. ಮಾತ್ರವಲ್ಲ 08 ಕಥಸಂಕನಗಳು,19 ಮಕ್ಕಳಿಗೆ ಸಂಬಂದಿಸಿದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲೆ ಅಗ್ರಗಣ್ಯರೆನಿಸಿದ್ದಾರೆ.ಇವರ ಕಾದಂಬರಿಗಳಾದ "ಹುಲಿ ಬೋನು","ಹುಲಿಯು ಪಂಜರದೊಳಿಲ್ಲ","ಗಿರಿಕನ್ಯೆ" ಹಾಗೂ "ಜಿಂಬ ಹಿಡಿದ ಮೀನು" ಕಥಾಸಂಕಲನ  ಕೃತಿಯು ಕನ್ನಡ ಸಾಹಿತ್ಯ ಪುರಸ್ಕಾರವನ್ನು ಪಡೆದುಕೊಂಡಿವೆ. ಇವರ ಬರಹಗಳಲ್ಲಿ ಸಾಮಾನ್ಯವಾಗಿ ಮಹಿಳಾ ಸಂವೇದನೆಯು ಪ್ರಮುಖವಾಗಿ ಕಾಣುವ ಹೆಗ್ಗುರುತುಗಳು ಇದರಿಂದಲೇ ಇವರ ಬಹಳಷ್ಟು ಕಾದಂಬರಿಗಳು ಸ್ತ್ರೀ ಪ್ರಧಾನ ಭೂಮಿಕೆಯನ್ನುಳ್ಳವಾಗಿವೆ.

       ಹುಟ್ಟು ಸ್ವಾತಂತ್ರ ಹೋರಟಗಾರ, ಸಂವೇಧನಶೀಲ ಬರಹಗಾರ, ಕಾದಂಬರಿಕಾರ, ಕಥೆಗಾರ, ಶಿಶುಸಾಹಿತಿಯಾದ ಇವರು, ತಮ್ಮ 57 ವರ್ಷ ಜೀವನಕ್ಕೆ ವಿದಾಯ ಹೇಳಿದ್ದು   ಏಪ್ರೀಲ್ 04,1973.  ಯಾರಲ್ಲಿಯೂ ಕೈ ಚಾಚದೆ  ಮೇಷ್ಟ್ರು ಗಿರಿ ಮಾಡುತ್ತಲೇ ಸರಳ ಬದುಕು ನಡೆಸಿದ ಭಾರತಿಸುತರು ಯಾವ ಸೌಕರ್ಯು ಇಲ್ಲದ ನಿರ್ಲಕ್ಷಕ್ಕೆ ಒಳಗಾದ ಒಂದು ಜಿಲ್ಲೆಯಾಗಿದ್ದಾಗ ಕಾಫಿ ಬೆಳೆಗಾರರು ಬಡತನದಲ್ಲಿದ್ದಾಗ ಯಾವ ಬ್ಯಾಂಕು ಸಾಲ ಸೌಲಭ್ಯಗಳು ನೀಡದಿದ್ದ ಕಾಲದಲ್ಲಿ ಕೇವಲ ಒಂದು ಜನಾಂಗದ ಜೀವನ ಮಾತ್ರ ಚಿಂತಿಸದೆ ಗಿರಿಜನರ ಜೀವನಕ್ಕೂ ಬೆಲೆ ಇದೆ ಅವರ ಬದುಕಿನಲ್ಲೂ ಸೌಂದರ್ಯವಿದೆ ಎಂದು ತೋರಿಸಿಕೊಟ್ಟವರು.  ಭಾರತಿ ಸುತರು ಕಾಲವಾದ ಮೇಲೆ ಮಾನಸ ಗಂಗೂತ್ರಿಯ ಕನ್ನಡ ಅಧ್ಯಾಯನ ಸಂಸ್ಥೆ ಅವರ ಜ್ಞಾಪಕಾರ್ಥವಾಗಿ ಬ್ರಹ್ಮಗಿರಿ ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದಿದ್ದು ಅದರಲ್ಲಿ ಭಾರತಿ ಸುತ ಕಾದಂಬರಿಗಳ ಸಣ್ಣ ಕಥೆಗಳ ವಿಶ್ಲೇಷಣೆ ಸಿಗುತ್ತದೆ. ಮರಣದ ನಂತರ ಕನ್ನಡ ಸಾಹಿತ್ಯ ಅಕಾಡೆಮಿಯಿಂದ 1973 ರಲ್ಲಿ ಮರಣೊತ್ತರವಾಗಿ ಗೌರವ ನೀಡಲಾಗಿದೆ.

ಭಾರತೀಸುತರ ಒಂದು ಕವನದ ಸಾಲುಗಳು ಹೀಗಿವೆ…

ಇರುಳಿನಲ್ಲಿ ದಾರಿಗಾಣದೇ ನೊಂದಿಯೇ ನಾನು

ಕಲ್ಮುಳ್ಳುಗಳನ್ನು ತುಳಿದಿಹೆನು

ಅಂತ್ಯವಿಲ್ಲದ ಕಡಲಿನಂತೆ ಹರಡಿಹುದು

ಭೀಕರ ಯಾಮಿನಿಯು

ಸಂಗಡಿಗರು ಎನಗಿಲ್ಲ ಈ ದಾರಿಯಲ್ಲಿ

ಏಕಾಂಗಿ ನಾನಾಗಿ ಇಡುತಳಿಹೇನು ಹೆಜ್ಜೆಗಳನ್ನು ಮುಂದೆ (ಕವನ ಅಪೂರ್ಣವಾಗಿದೆ)

ಭಾರತೀಸುತರು ಏಕೆ ಪ್ರಚಾರಕ್ಕೆ ಬರಲಿಲ್ಲ ಎನ್ನುವುದಕ್ಕೆ ಮೇಲಿನ ಕವನ       ಉತ್ತರ ನೀಡುತ್ತದೆ('' ಬ್ರಹ್ಮಗಿರಿ’’ಅವರ ಮಿತ್ರರಾದ ಎನ್ ಮಹಾಭಲೇಶ್ವರ   ಭಟ್,ದಿ.ಕೆ ಸಚ್ಚಿದಾನಂದಯ್ಯ ಮತ್ತು ಎಲ್ಆರ್ ಭಟ್ಟ್ಸಸಂಪಾದಕತ್ವದಲ್ಲಿ ಮೂಡಿ ಬಂದ ಅಭಿನಂದನಾ ಗ್ರಂಥ)  ಹಿರಿಯ       ಸಾಹಿತಿ     ಪ್ರೊದೇಜೆಗೌರವರುಅವರುಮಠ ಕಟ್ಟಿದವರಲ್ಲಪಂಥ ನಿರ್ಮಿಸಿದವರಲ್ಲ,ಸವಾಲೆಸದವರಲ್ಲಶಿಷ್ಯರನ್ನುಛೂ ಬಿಟ್ಟವರಲ್ಲರಾಜಕೀಯ ಮಾಡಿದವರಲ್ಲ,ಆದ್ದರಿಂದ ಅವರು ಲೋಕದ ಗಮನಸೆಳೆಯಲಿಲ್ಲಅವರು ಸೃಷ್ಟಿಸಿರುವ  ಸಾಹಿತ್ಯ  ಗುಣಮೌಲ್ಯ  ಪ್ರಮಾಣಗಳಲ್ಲಿ  ದೊಡ್ಡದಾದರೂ,  ಅದಕ್ಕನುಗುಣವಾಗಿ  ಪ್ರಾಶಸ್ತ್ಯ  ಅವರ  ಜೀವಿತ ಸಮಯದಲ್ಲಿ  ದೊರೆಯದಿದ್ದದ್ದು  ಪ್ರಾಜ್ಞರ  ಮನಸ್ಸಿನಲ್ಲಿ  ಕಳವಳ  ಉಂಟುಮಾಡುವಂತ ವಿಚಾರವಾಗಿದೆ.  ಇದು  ಕಾಲದಲ್ಲೆ ಭಾರತೀಸುತರಿಗೆ ದೊರೆತ ದೊಡ್ಡ ಪ್ರಶಸ್ತಿಅದು ಇವರೊಬ್ಬರಿಂದ ಮಾತ್ರವಲ್ಲ     ಹಾ..ನಾಯಕ್,  ಕಾವ್ಯನಂದ,ಕಯ್ಯಾರ ಕಿಞ್ಞಣ್ಣ ರೈ,ಜಿ.ಟಿ ನಾರಯಣರಾವ್,ಡಾ!! ಚಿದಾನಂದ ಮೂರ್ತಿ,ಪ್ರೊ.ಅಮೃತ ಸೋಮೇಶ್ವರಡಾಕಮಲಾ ಹಂಪನಾಮುಂತಾದವರ ಅಭಿಪ್ರಾಯವು ಬಹುತೇಕ ಇದೆ ಆಗಿದೆ.

Sunday, 7 August 2011

ಕಾಣದ ಗೆಳೆತನಕ್ಕೆ ಹಂಬಲಿಸಿದೇ ಮನ.............

ಕೆ.ಎಸ್.ಧನಂಜಯ,ಮಡಿಕೇರಿ


    ಗೆಳೆಯರೆ ಏಕಲವ್ಯ ಮಹಾಭಾರತ  ಕಥೆಯಲ್ಲಿ ಬರುವ ಒಬ್ಬ ಬಿಲ್ಲು ವಿದ್ಯೆ ಪ್ರವೀಣ. ವ್ಯಕ್ತಿ ಕಾಡಿದರು ಬೇಡಿದರು ಅಂಗಲಾಚಿ ಬೇಡಿದರು ದ್ರೋಣಚಾರ್ಯರು ಗುರುವಾಗಿ ಏಕಲವ್ಯನಿಗೆ ಸಿಗಲಿಲ್ಲ. ಆದರೆ ಗುರುವಾಗಿ ಅವರನ್ನೆ ಸ್ವೀಕರಿಸುವ ನಿರ್ಧಾರದಿಂದ ಸ್ವತಃ ಏಕಲವ್ಯ ಹೊರ ಬರಲಿಲ್ಲ.  ಏಕಾಗ್ರತೆಯಲ್ಲಿ ಅವನಿಗೆ ತೆರೆಯಾಗಿ ಕೆಲಸ ಮಾಡಿದು  ಆ ಗುರುವಿನ ಮೂರ್ತಿ.( ಹೇಗೆ ಪ್ರಕೃತಿ ಮತ್ತು ಮನುಷ್ಯನ ಮಧ್ಯೆ ಒಂದು ಸೂಕ್ಷ್ಮವಾದ ತೆರೆ ಎಂಬುವುದು  ದೇವರೆಂದು ಪಂಡಿತರು ಕರೆಯುತ್ತಾರೆಯೋ ಹಾಗೇ) ಮನುಷ್ಯನ ಆಂತರಿಕ ಮತ್ತು ಬಾಹ್ಯ ಸಂಭಂದದ ಕೊಂಡಿಯೆ ಗೆಳೆತನ. ಮನುಷ್ಯನ ಜೀವನದ ಅಮೂಲ್ಯ ವಸ್ತು. ಸ್ನೇಹ ಸ್ನೇಹಿತನಿಲ್ಲದ ವ್ಯಕ್ತಿ ಸಂತೆಯಲ್ಲಿಯೂ ಏಕಾಂಗಿ ಎನ್ನುವುದು ಪಾಟೀಲ್ ಪುಟ್ಟಪ್ಪನವರ ನುಡಿ.
     ಗೆಳೆತನಕ್ಕೆ ನಂಬಿಕೆ ಎನ್ನುವುದು ಬಲು ಮುಖ್ಯ ತನ್ನ ತನವನ್ನು, ತನ್ನ ಬದುಕಿನ ಅಮೂಲ್ಯ ಚಿಂತನೆಗಳನ್ನು , ಆಚಾರ ವಿಚಾರಗಳನ್ನು ಇನ್ನೊಬ್ಬ ವ್ಯಕ್ತಿಯ ಆಚಾರ ವಿಚಾರದೊಂದಿಗೆ ಬೆರೆಸಿ ಪರಸ್ಪರ  ಸರಿ ಮತ್ತು ತಪ್ಪುಗಳನ್ನು ವಿಮರ್ಶಿಸಿ ಸರಿಯಾದದ್ದನ್ನು ಅಳವಡಿಸಿ ಕೋಳ್ಳುವುದು ಗೆಳೆತನ. ಇದು ಪರಸ್ಪರ ವ್ಯಕ್ತಿ ಮತ್ತು ವ್ಯಕ್ತಿತ್ವದ ಮಧ್ಯೆ ಇರುವ ಸಂಭಂದದ ಸೇತುವೆ.  ಈ ಸೇತುವೆ ಮೇಲೆ ಮನುಸ್ಸು ಮತ್ತು ಮನುಷ್ಯರ ಆಭಿಯಾನ. ಈ ಆಭಿಯಾನ ಅಗೋಚರ ವಿಶ್ಮಯ ಮತ್ತು ಆಹ್ಲಾದಕ, ಮನುಷ್ಯ ಸಂಘಜೀವಿಯಾಗಿ ಬೆಳವಣಿಗೆ ಕಾಣಲು ಇರುವ ಏಕಮಾತ್ರ ದಾರಿ.  ಗೆಳೆಯ FRIEND ಈ ಪದದ ಮೊದಲ ಮೂರು ಅಕ್ಷರ ಬಾಹ್ಯ ಸಂಭಂದದೊಂದಿಗೆ ಹೆಚ್ಚು ಪ್ರಚಲಿತವಾದರೆ, ಎಂದರೆ ಗುರು,ಗುರುಗಳು ಸಮಾಜದಲ್ಲಿ ನಾವು ಪ್ರತೀಸುವ ಹಿರಿಯ ವ್ಯಕ್ತಿಗಳು. ಒಟ್ಟಿನಲ್ಲಿ ರಕ್ತ ಸಂಭಂದವನ್ನು ಹೊರತುಪಡಿಸಿ ಎನ್ನಬಹುದು, END ಇದು ಬದುಕಿನಲ್ಲಿ ತಂದೆ ತಾಯಿ ಸಂಭಂದ ಹೆಂಡತಿ ಮಕ್ಕಳ ಸಂಭಂದದೊಂದಿಗೆ END ಆಗುತ್ತದೆ. FAITH(ನಂಬಿಕೆ), REAL ನೈಜತೆ, INTIMATE ಪರಸ್ಪರ ವಿಷಯಗಳನ್ನು ಅರಿತುಕೊಳ್ಳುವುದು ಬದುಕಿನ ದೈನಂದಿನ ಆಗು-ಹೋಗುಗಳ ಬಗ್ಗೆ ಚರ್ಚಿಸುವುದು,ಇದು ಬಾಹ್ಯ ಸಂಭಂದದೊಂದಿಗೆ ಬೆರೆತುಕೊಂಡಿರುವ ಸಂಭಂದ. ಆದರೆ EARNEST ಮಾತು ಕೇಳುವುದು ,NEAREST ಹತ್ತಿರವಾಗುವುದು, DEAREST ಪ್ರೀತೀಯವನಾಗಿರುವುದು. ( ಕೆಲವರು ಹತ್ತಿರವಿದ್ದರು ದೂರವೇ ನಿಲ್ಲುತ್ತಾರೆ ಅದು ತಮ್ಮ ಹಮ್ಮವಿನ ಪ್ರದರ್ಶನವಲ್ಲದೆ ಬೇರೆ ಏನು ಅಲ್ಲ.)
     ತಂದೆ-ತಾಯಿ, ಅಣ್ಣ-ಅಕ್ಕಂದಿರ ಮಧ್ಯೆ ಇರುವ ಗೆಳೆತನ. ಬದುಕಿನಲ್ಲಿ ಕೆಟ್ಟ ಸಹವಾಸಗಳು ಮುತ್ತಿಕೋಳ್ಳುವಂತೆ ಒಳ್ಳೆಯ ಸಹವಾಸ ದೊರೆಯುವುದು ವಿರಳ. ಗೆಳೆತನಕ್ಕೆ ತನ್ನದೆ ಆದ ದೊಡ್ಡತನವಿದೆ ಎಂದರೆ ದೊಡ್ಡ ಮನಸ್ಸಿನ ವ್ಯಕ್ತಿಯೊಂದಿಗೆ ಮಾಡಬೇಕು ಬದುಕಿನ ವಿವಿಧ ಮಜಲುಗಳಲ್ಲಿ ಸಿಗುವ ವ್ಯಕ್ತಿಗಳ ಸಹವಾಸ ಮಾಡಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲಿರು ವ್ಯಕ್ತಿಗಳನ್ನು ಗೆಳೆಯರಾದರೆ ಪರಸ್ಪರ ವಿಷಯಗಳ ವಿನಿಮಯ ಆಗುತ್ತದೆ. ಜ್ಞಾನ ವಿಸ್ತಾರತೆ ಬೆಳೆಯುತ್ತದೆ. ಹೊಸ ವಿಷಯಗಳತ್ತ ಮನಸ್ಸು ಮುಖ ಮಾಡುತ್ತದೆ. ಅದರಿಂದ ವ್ಯಕ್ಯಿಗತವಾಗಿ ಲಾಭವೇ. ಇದರ ಬಗ್ಗೆ ಅಭಿನವ ಬೀಚಿ ಎಂದೆ ಖ್ಯಾತರಾದ ಗಂಗಾವತಿಯ ಪ್ರಾಣೇಶ್ ಒಂದು ಹಾಸ್ಯ ಪ್ರಸಂಗದಲ್ಲಿ ಹೀಗೆ ಹೇಳುತ್ತಾರೆ ಒಬ್ಬ ಪೊಲೀಸ್,ವಕೀಲ,ಮತ್ತು ಡಾಕ್ಟರ್‍ ಒಂದು ಕಟ್ಟೆಯ ಮೇಲೆ ಕುಳಿತು ವಾದ ಮಂಡಿಸುತ್ತಿರುತ್ತಾರೆ ನಾನು ನಿನಗಿಂತ ಮೇಲು ಎಂದು ಒಬ್ಬ, ಮತ್ತೊಬ್ಬ ನಾನು ನಿನಗಿಂತ ಮೇಲು ಎಂದು , ಹೇಗೆ ಎಂದಾಗ ಪೊಲೀಸ್ ಮೊದಲು ಆಭಿಪ್ರಾಯ ಮಂಡಿಸುತ್ತಾನೆ ನಾನು ಸುಮ್ಮ ಸುಮ್ಮನೆ ಒದ್ದು ಒಳಗೆ ಹಾಕುತ್ತೇನೆ, ಆಗ ವಕೀಲ ನೀನು ಒದ್ದು ಒಳಗೆ ಹಾಕಿದರೆ ನಾನು ಬಿಡಿಸಿಕೊಂಡು ಬರುತ್ತೇನೆ. ಆಗ ಡಾಕ್ಟರ್‍ ಹೌದೋ ಮಗನೇ ನೀನು ಸುಮ್ಮ ಸಮ್ಮನೆ ಒದ್ದು ಒಳಗೆ ಹಾಕುತ್ತೀಯ, ಅವ ಸುಮ್ಮ ಸುಮ್ಮನೆ ಬಿಡಿಸಿಕೊಂಡು ಬರುತ್ತಾನೆ. ನಿಮ್ಮಿಬ್ಬರಿಗೂ ತಲೆ ಕೆಟ್ಟಿದೆ ಎಂದು  ನಾನು ಪ್ರಮಾಣ ಪತ್ರ ಕೊಟ್ಟರೆ ? ಇದು ಪರಸ್ಪರ ಯಾರು ಹೆಚ್ಚು ಯಾರು ಕಡಿಮೆ ಎಂಬ ವಾದ ಮಾತ್ರವಲ್ಲ ಪರಸ್ಪರ ವ್ಯಕ್ತಿಯ ಅನಿವಾರ್ಯತೆ ಕೂಡ ಹೌದು. ತನಗಿಂತ ದೊಡ್ಡವರೊಂದಿಗೆ ದೊಡ್ಡ ಮನಸ್ಸಿನವರೊಂದಿಗೆ ಗೆಳೆತನ ಮಾಡಬೇಕೆನ್ನುವುದೇನೋ ಸರಿ ಆದರೆ ದೊಡ್ಡವರೆಲ್ಲ ಜಾಣರಲ್ಲವಲ್ಲ ? ಸ್ನೇಹ ಮಾಡಿದ ಮೇಲೆ ಅವನ್ನು ಕೆಟ್ಟ ವಿಷಯಗಳಿಗಾಗಿ ದೂರ ಮಾಡುವುದು ಕಷ್ಟವೇನೋ ನಿಜ, ದೊಡ್ಡ ಮನಸಿನವರೊಂದಿಗೆ ಗೆಳೆತನ ಮಾಡುವುದರಿಂದ ಒಳ್ಳೆಯ ವಿಷಯಗಳನ್ನು ಮೈಗೂಡಿಸಿಕೊಳ್ಳ ಬಹುದು ಇಲ್ಲಾ ನಮ್ಮಲ್ಲಿರುವ ಅಷ್ಟು ಕೆಟ್ಟತನವನ್ನು ಕಡಿಮೆ ಮಾಡಿ ಕೊಳ್ಳಲುಬಹುದು ? ಒಳ್ಳೆಯ ವ್ಯಕ್ತಿಗಳು ಗೆಳೆಯರಾಗದಿದ್ದರೆ ಏಕಲವ್ಯ ದೋಣಚಾರ್ಯರನ್ನು ಒಲಿಸಿಕೊಂಡ ರೀತಿಯಲ್ಲಾದರೂ ??? Any way happy friendship day……. 





Tuesday, 2 August 2011

ಪೋಷಕರೆ, ಮಾನಗೇಡಿ ಲಜ್ಜೇಗೇಡಿ ಶಿಕ್ಷಕರು ನಿಮ್ಮೂರಿನ ಶಾಲೆಗಳಲ್ಲೂ ಇರಬಹುದು ಜೋಪಾನ....!

ಕೆ.ಎಸ್.ಧನಂಜಯ,ಮಡಿಕೇರಿ.



     ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಣಿ ಅರ್ಥ ಕಳೆದುಕೊಳ್ಳುತ್ತಿದೆ ಎಂದು ಈಗ ಅನಿಸಿದರೆ ಅದಕ್ಕೆ ಸಂಶಯ ಬೇಡ. ನೆನ್ನೆ ದಟ್ಸ್ ಕನ್ನಡ ಆನ್ ಲೈನ್ ಪತ್ರಿಕೆಯಲ್ಲಿ ಸಹ ಒಬ್ಬ ಶಿಕ್ಷಕ ವಿಧ್ಯಾರ್ಥಿಯ ಮೇಲೆ ಆತ್ಯಾಚಾರ ಎಸಗಿದನ್ನು ಓದಿದೆ, ಮಾತ್ರವಲ್ಲ ಇತ್ತೀಚೀನ ಕೆಲವು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಗುರುವೆ ಸಹಕಾರ ನೀಡುವುದು ಈಗೆ ಹಲವಾರು ವಿಷಯಗಳನ್ನು ಗಮನಿಸಿದಾಗ ಎಂತಹ ಸಮಾಜಕ್ಕೆ ನಾವು ಮುನ್ನುಡಿ ಬರೆಯುತ್ತಿದ್ದೇವೆ, ವೈಜ್ಞಾನಿಕವಾಗಿ ಮುಂದುವರಿದಂತೆಲ್ಲ ಇಂತಹ ಪ್ರಕರಣಗಳು ವಿಪರೀತವಾಗುತ್ತಿವೆಯಾ? ಅದನ್ನು ಕೆಲವು ಮಾದ್ಯಮಗಳು ಮೇಲಿಂದ ಮೇಲೆ ಭಿತ್ತರಿಸುವ ಔಚಿತ್ಯವಾದರು ಏನು? ಇಂತಹ ನೀತಿಗೆಟ್ಟ ವೃತ್ತಿಯಲ್ಲಿ ತೊಡಗಿರುವ ಶಿಕ್ಷಕರಿಗೆ ಒಂದು ಅಮಾನತ್ತಿನ ಶಿಕ್ಷೆ ವಿಧಿಸಿ ಅವರು ರಿಪೇರಿಯಾಗಿದ್ದಾರೆ ಎಂದು ತಿಳಿದು ಅವರನ್ನು ಮತ್ತೆ ಅದೇ ಪವಿತ್ರವಾದ ಗುರುವಿನ ಸ್ಥಾನದಲ್ಲಿ  ನಿಲ್ಲಿಸಿದರೆ ಅವರ ಮೇಲೆ ಅಭಿಮಾನವಾಗಲಿ, ಗೌರವವಾಗಲಿ ಮೂಡುವುದಾದರು ಹೇಗೆ? ಅಂತವರು ಗುರು ಎನ್ನಲು ಯೋಗ್ಯವಾಗ್ತರಾ? 
     ರಾಷ್ಟ್ರಕವಿ ಕುವೆಂಪುರವರು ಹೇಳುತ್ತಾರೆ " ಅನ್ನ ಬಟ್ಟೆಯನ್ನು ಸಂಪಾದಿಸುವುದು ಮಾತ್ರ ವಿಧ್ಯೆಯ ಗುರಿಯಲ್ಲ, ಓರ್ವ ವ್ಯಕ್ತಿಯನ್ನು ಎಲ್ಲಾ ವಿಧದಲ್ಲಿಯು ಉಪಯುಕ್ತ ವ್ಯಕ್ತಿಯನ್ನಾಗಿ ಪರಿವರ್ತಿಸುವ ಹೊಣೆ ಕೂಡ ಶಿಕ್ಷಣದಾಗಿದೆ. ಇಂತಹ ಮಾತುಗಳಿಗೆ ಇಂತಹ ಗುರುಗಳು ಅರ್ಹವಾಗುತ್ತಾರ? ಇಂತಹ ಶಿಕ್ಷಕರಿಂದ ರಾಷ್ಟ್ರದ ಅಭ್ಯುದಯ ಸಾಧಿಸಬಲ್ಲ ಚೈತನ್ಯ ಹೊಂದಿರುವ ಪ್ರಜೆಗಳನ್ನು ತಯಾರು ಮಾಡುತ್ತಾರೆಯೆ? ಇಂತಹವರು ನೀಡುತ್ತರುವ ವಿದ್ಯೆಯಿಂದ ಉಡಾಪೆ,ಬೇಜವಾಬ್ದಾರಿ, ಅಹಂಕಾರ,ದುಷ್ಟ, ಸಂಕುಚಿತ ಪವೃತ್ತಿ ತುಂಬಿದ ವಿಧ್ಯಾರ್ಥಿ ಸಮೂಹ ನಿರ್ಮಾಣವಾಗುತ್ತದೆಯೆ ಹೊರತು ಉತ್ತಮ ಸಮಾಜವಲ್ಲ. ಇಂತಹ ಸಮೂಹ ನಿರ್ಮಿಸುವ ಶಿಕ್ಷಕರು ಗುರುವು ಅಲ್ಲ, ಅವರಿಂದ ಕಲಿತ ವಿಧ್ಯಾರ್ಥಿಗಳಿಗೆ ಗುರಿಯು ಇರುವುದಿಲ್ಲ.
     ಗೆಳೆಯರೆ ಎಂತಹ ನೀಚ ಶಿಕ್ಷಕರನ್ನು ಇಂತಹ ಶ್ರೇಷ್ಟ ಜಾಗದಲ್ಲಿ ಕಾಣುತ್ತಿದ್ದೇವೆ ಆಧುನಿಕ ಜಗತ್ತಿನಲ್ಲಿ ಸಮಾಜದ ಸರ್ವತೋಮುಖ ಪ್ರಗತಿಗೆ ಅನಿವಾರ್ಯವಾದ ಹಲವಾರು ಪರಿಕರಗಳಲ್ಲಿ ವಿಧ್ಯೆ ಅತ್ಯಂತ  ಪ್ರಮುಖವಾದದ್ದು. ಸಾರ್ವತ್ರಿಕವಾದ ಮೌಲ್ಯಾದರಿತವಾದ ಶಿಕ್ಷಣ ಅಂದಾಗ ಅಂತಹ ಶಿಕ್ಷಣವನ್ನು ನೀಡುವ ಹೊಣೆ ಹೊತ್ತಿರುವ ವ್ಯಕ್ತಿಗೆ ಮಾತ್ರ ಗುರು ಎನ್ನಲು ಸಾಧ್ಯ ಹೊರತು, ವಿದ್ಯಾರ್ಥಿಗಳ ಮೇಲೆ ಕಾಮ ದೃಷ್ಠಿ ಹಾಯಿಸುವ ಮಾನಗೇಡಿ ಮೇಷ್ಟ್ರುಗಳಿಗಲ್ಲ, ಬೋಧನೆ ಜೊತೆ ಯುವಕ ಯುವತಿಯರಲ್ಲಿ ವಿಚಾರ ಪರತೆ, ವೈಜ್ಞಾನಿಕ ಮನೋಭಾವ, ರಾಷ್ಟ್ರ ನಿಷ್ಟೆ ಮೂಡಿಸುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ವಿಧ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರು ಬೇಕಾಗಿದ್ದಾರೆಯೇ ಹೊರತು ಮಾನಗೆಟ್ಟ ಮಯಾðದೆ ಬಿಟ್ಟ ಶಿಕ್ಷಕರಲ್ಲ. ಇವರುಗಳು ಗುರು ಎಂದು ಸಂಭೋದಿಸಲು ಯಾವ ಕೋನದಲ್ಲೂ ಅರ್ಹರಲ್ಲ.
     ಗುರುವಿನ ಕಾರ್ಯ ಒಂದು ವೃತ್ತಿಯಲ್ಲ ಅದೊಂದು ಧಾರ್ಮಿಕ ಕ್ರೀಯೆ " ಗುರು " ಎಂಬ ಶಬ್ದವು ಆತನಲ್ಲಿನ ಆಶಕ್ತಿ ಮತ್ತು ಆದರ್ಶವಾದಕ್ಕೆ ಹಿಡಿದ ಕನ್ನಡಿ, ಎಂದರೆ ಪ್ರಮಾಣಿಕತೆ, ಉತ್ಸಾಹ, ಸೇವಾ ಮನೋಭಾವದ ಪ್ರತೀಕ. ಖಚಿತವಾದ ಗುರಿಯೆಡೆ ದುಡಿಯಲು ಸ್ಫೂರ್ತಿದಾಯಕ ಕಣಜ. ಗುರುವಿನ ವೃತ್ತಿಗೆ ಬರಲು ನೂರೆಂಟು ಕಾರಣವಿರಲಿ, ತನ್ನ ವೃತ್ತಿಯಲ್ಲಿ ನಿರತವಾಗಿ ವಿಧ್ಯಾರ್ಥಿಗಳ ಪೋಷಕರ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗುವಂತಹ ವಾತವರಣ ನಿಮಿðಸಿಕೊಂಡರೆ ಮಾತ್ರ ಆತ ಗುರು ಎನ್ನಲು ಸಾಧ್ಯ ದುರಂತ ಎಂದರೆ ಇಂತಹ ನೀಚ ಪ್ರವೃತ್ತಿಗೆ ಸಿಕ್ಕಿ ನಲುಗುತ್ತಿರುವವರು ನಮ್ಮ ಹಳ್ಳಿಯ ಬಡತನದಲ್ಲಿ ಬೆಳೆದು ಬಂದ ಮಕ್ಕಳು ಎಂಬುವುದು ಕೂಡ ನೋವಿನ ವಿಚಾರ. ಕೇವಲ ಸಂಬಳಕ್ಕಾಗಿ  ದುಡಿಯುವ ಶಿಕ್ಷಕರಿಗೇನು ಗೊತ್ತು ಕಸ್ತೂರಿಯ ಪರಿಮಳ. ಇಂತಹ ಮಾನಗೇಡಿ ಶಿಕ್ಷಕರು ಮಚ್ಚು ನೀಡಿ ಮರ ಮತ್ತು ನರ ಎರಡನ್ನು ಕಡಿ ಎಂದು ಬೋದಿಸುವವರೆ ಹೊರತು ಇಂತಹವರಿಂದ ಹೆಚ್ಚಿನದನ್ನು ಏನು ನಿರಿಕ್ಷೀಸ ಬಹುದು?
     ಇಂತಹ ಶಿಕ್ಷಕರ ಕೈಗೆ ಯುವ ಸಮುದಾಯವನ್ನು ಮಳೆ ನೀರೆಂದು ನೀಡಿದರೆ ಅದನ್ನು ಚರಂಡಿಗೆ ಹರಿಯ ಬಿಡುತ್ತಾರೆ, ಪರಿಣಾಮ ಸೊಳ್ಳೆಯ ಕಾರ್ಖಾನೆಯಾಗಿ ಮಲೇರಿಯದಿಂದ ಕೂಡಿದ ಸಮಾಜದ ಜನಕರಾಗುತ್ತಾರೆ ಹೊರತು ಅದನ್ನು ಪರಿಷ್ಕರಿಸಿ ಸಮಾಜಕ್ಕೆ ಕುಡಿಯುವ ನೀರನ್ನಾಗಿ ನಿರ್ಮಿಸಿ ಕೊಡುತ್ತಾರೆ ಎನ್ನುವುದು ಕೇವಲ ಕನಸು ಮಾತ್ರ. ಒಂದೆಡೆ ಒಳ್ಳೆಯ ಶಿಕ್ಷಕರಿಂದ ಉತ್ತಮ ಸಮಾಜದವು ನಿಮಾರ್ಣವಾಗುತ್ತಿದೆ ಮತ್ತೊಂದೆಡೆ ಲಜ್ಜೆಗೇಡಿ ಮಾನಗೇಡಿ ಶಿಕ್ಷಕರಿಂದ ರೋಗಗ್ರಸ್ತ ಸಮಾಜವು ಬೆಳೆಯುತ್ತಿರುವುದು ವಿಪರ್‍ಯಾಸ. ಇಂತಹದಕ್ಕೆ ಕಾನೂನಿನಲ್ಲಿ ಅಮಾನತ್ತು, ವೇತನ ತಡೆ ಹಿಡಿಯುವುದು ಹೆಚ್ಚೆಂದರೆ ಅಂತಹ ಗಂಭೀರ ಸಮಯದಲ್ಲಿ ವಜಾ. ಆದರೆ ಒಂದು ಶಾಲೆ ಎಂದ ಮೇಲೆ ಅದನ್ನು ಕೇಳುವ ಪೋಷಕರ ಪರಿಷತ್ತಿದೆ, ಸಾರ್ವಜನಿಕರಿದ್ದೇವೆ ನಾವೆಲ್ಲ ಒಂದಾಗದೆ ಹೋದರೆ ಪರೋಕ್ಷವಾಗಿ ಇಂತಹ ಕೆಟ್ಟ ಸಮಾಜಕ್ಕೆ ನಾವೇ ಕಾರಣರಾದರು ಆಶ್ಚರ್ಯವಿಲ್ಲ. ಶಾಲಾಭಿವೃದ್ದಿ ಸಮಿತಿಗೆ, ರಕ್ಷಣ ಇಲಾಖೆಯವರು,ನಿವೃತ್ತ ಸರ್ಕಾರಿ ನೌಕರರು, ಸಮಾಜದ ಗಣ್ಯ ವ್ಯಕ್ತಿಗಳು, ಮುಂತಾದ ಸಮಾಜ ಪರ ಕಾಳಜಿಯಿರುವ ಸಂಘಟನೆಗಳ ನೇತೃತ್ವ ಬೇಕಾಗಿದೆ. ಹಾಗಾಗಿ ತೀರ್ಮಾನ ನಮ್ಮ ಕೈಯಲ್ಲಿದೆ ನಮ್ಮ ಶಾಲೆ ನಮ್ಮೂರಿನ ಶಾಲೆಯಾಗ ಬೇಕಾಗಿದೆ ಎನಂತೀರಾ ?